IMG 20201119 WA0007

ಟಿಪ್ಪರ್ ಗೆ ಸಿಲುಕಿ ಯುವಕನೋರ್ವ ಸಾವು….!

ಪಾವಗಡ: ಟಿಪ್ಪರ್  ಗೆ ಸಿಲುಕಿ ಯುವಕನೋರ್ವ ಸಾವು. ಪಾವಗಡ : – ಟಿಪ್ಪರ್ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನ ಸವಾರ ಸಾವನ್ನಪ್ಪಿರುವ ಘಟನೆ ಪಾವಗಡ ಪೋಲೀಸ್ ಠಾಣಾ ವ್ಯಾಪ್ತಿಯ ಕಿಲಾರ್ಲಹಳ್ಳಿ ಮತ್ತು ದವಡಬೆಟ್ಟ ಗ್ರಾಮದ ರಸ್ತೆಯ ನಡುವೆ ಇಂದು ಬೆಳಿಗ್ಗೆ 8.30 ಸುಮಾರಿಗೆ ನಡೆದಿದೆ. ಈ ಅಪಘಾತದಲ್ಲಿ ಇಪ್ಪತ್ತೇಳು ವರ್ಷದ ಯುವಕ ರಾಮ್ ಕುಮಾರ್ ನಾಯ್ಕ ಸಾವನ್ನಪ್ಪಿರುವ ದುರ್ಧೇವಿಯಾಗಿದ್ದಾನೆ. ಈತ ಪಾವಗಡ ತಾಲ್ಲೂಕಿನ ದವಡಬೆಟ್ಟ ತಾಂಡದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದ್ದು ನಾರಾಯಣ ನಾಯ್ಕ ಮತ್ತು […]

Continue Reading
IMG 20201117 WA0017

ಪಾವಗಡ: ಅಕ್ಕಿಪಿಕ್ಕಿ, ಬುಡುಬುಡಿಕೆ ಜನರ ನೆರವಿಗೆ ಬಂದ ಸ್ವಾಮೀಜಿ….!

  ಪಾವಗಡ:- ಪಟ್ಟಣದಲ್ಲಿ ವಾಸವಿರುವ ಅಕ್ಕಿಪಿಕ್ಕಿ, ಬುಡುಬುಡಿಕೆ ಅಲೆಮಾರಿ ಜನಾಂಗದವರ ದುಸ್ಥರದ ಬದುಕನ್ನ ಕಂಡ ಶ್ರೀ ಸರ್ವಧರ್ಮ ಶಾಂತಿ ಪೀಠ ಆಶ್ರಮದ ರಾಮೂರ್ತಿ ಸ್ವಾಮೀಜಿಗಳು ಆಹಾರದ ಪಡಿತರ ವಿತರಿಸಿ ಅವರಲ್ಲಿ ವಿಶ್ವಾಸ ತುಂಬಿದರು. ಕೊರೊನಾ ಆರಂಭದಿಂದಲೂ ಶ್ರೀ ರಾಮಾ ಮೂರ್ತಿ ಸ್ವಾಮೀಜಿಗಳು ತಮ್ಮ ಶಕ್ತಿ ಮೀರಿ ಬಡ ಬಗ್ಗರಿಗೆ, ನಿರ್ಗತಿಕರಿಗೆ ಆಹಾರವನ್ನ, ದವಸಧಾನ್ಯಗಳನ್ನು ವಿತರಿಸುವ ಮಹಾ ಮಾನವೀಯತೆ ಧರ್ಮವನ್ನ ಮೆರೆದಿದ್ದಾರೆ. ಇನ್ನು ಅಂದಂದಿನ ಊಟಕ್ಕೂ ಪರದಾಡುವ ಅದೆಷ್ಟೋ ಮಂದಿಗೆ ಹಣ್ಣು ಹಾಲು, ಬಟ್ಟೆಗಳನ್ನ ನೀಡುತ್ತ ಮಕ್ಕಳ ಶಿಕ್ಷಣಕ್ಕೆ […]

Continue Reading
IMG 20201117 WA0011

ಪಾವಗಡ: ಅತಂತ್ರದಲ್ಲಿ‌ 25 ಕುಟುಂಬಗಳು…!

ಪಾವಗಡ:- ವಾಸದ ಮನೆಯ ಗುಡಿಸಲುಗಳನ್ನು ತೆರವು ಮಾಡುವಂತೆ ಕೆಲ ಭೂ ಹಿಡುವಳಿದಾರರ ಕುಟುಂಬಸ್ಥ ಒಂದು ಗುಂಪಿನವರು ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಪಾವಗಡ ತಾಲ್ಲೂಕಿನ ಆಲದಮರದಟ್ಟಿ ಗೊಲ್ಲ ಜನಾಂಗದ ಸುಮಾರು ಇಪ್ಪತ್ತೈದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ. ಎಂಟು ದಶಕಗಳಿಂದೆ ನಮ್ಮ ತಾತಂದಿರ ಕಾಲದಲ್ಲಿ ಭೂ ಹಿಡುವಳಿದಾರರಿಂದ ಸಾಗುವಳಿಯಾಗಿ ಪಡೆದಿದ್ದ ಪ್ರಸ್ತುತ ವಾಸಿಸೋ ಜಮೀನಿನಲ್ಲಿ ಗುಡಿಸಲುಗಳನ್ನ ಹಾಕಿಕೊಂಡು ಜೀವಿಸುತ್ತಿದ್ದರು…ಅದು ತಮ್ಮ ವಂಶಾವಳಿ ಮುಂದುವರೆದಂತೆ ಜಾಗಕ್ಕೆ ಸಂಬಂಧಿಸಿದಂತೆ ವಾಸವಿದ್ದ ಕೆಲವರು ಖಾತೆಗಳನ್ನ ಪಡೆದುಕೊಂಡಿದ್ದೇವೆ, ವಿದ್ಯುತ್ ಸೌಲಭ್ಯದ ತೆರಿಗೆಗಳನ್ನ ಕಂದಾಯವನ್ನು ಸರ್ಕಾರಕ್ಕೆ ಕಟ್ಟುತ್ತಿದ್ದೇವೆ ನಮಗೆ […]

Continue Reading
IMG 20201114 WA0002

ವೈಎನ್ ಹೊಸಕೋಟೆ : ಗ್ರಾಮ ಪಂಚಾಯಿತಿ ಗೆ ನೂತನ ಉಪಾಧ್ಯಕ್ಷರ ಆಯ್ಕೆ…!

ವೈಎನ್ ಹೊಸಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಗೆ ನೂತನ ಉಪಾಧ್ಯಕ್ಷ ರ ಆಯ್ಕೆ. ಹಿಂದಿನ ಉಪಾಧ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದ ಸ್ನಾನಕ್ಕೆ ಶುಕ್ರನಾರ   ಚುನಾವಣೆ ನಡೆಯಿತು. ಪಿ.ಎ. ಶ್ರೀನಿವಾಸ್ ವೈಎನ್ ಹೊಸಕೋಟೆ  ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷ ರಾಗಿ ಅವಿರೋಧ ವಾಗಿ ಆಯ್ಕೆಯಾದರು. ಯಾರು  ಉಪಾಧ್ಯಕ್ಷ ಸ್ಥಾನ ಕ್ಕೆ ಉಮೇದುವಾರಿಗೆ ಸಲ್ಲಿಸದ ಕಾರಣ ಪಿ ಎ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಆದ ಪಾವಗಡ ತಹಶಿಲ್ದಾರ್ ನಾಗರಾಜ್ ಪ್ರಕಟಿಸಿದರು. ಆಯ್ಕೆ ಘೋಷಣೆ ಯ  ಸಂಧರ್ಭದಲ್ಲಿ  ಗ್ರಾಮ […]

Continue Reading
IMG 20201031 WA0016

ಪಾವಗಡ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ….!

  ಪಾವಗಡ ತಾಲ್ಲೂಕು ಆಡಳಿತ , ವಾಲ್ಮೀಕಿ ಜಾಗೃತಿ ಮೇದಿಕೆ, ಮದಕರಿ ನಾಯಕ ಸೇನೆವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಆಚರಿಸಲಾಯಿತು. ಮೊದಲು ಪಟ್ಟಣದ ಕುಮಾರ ಸ್ವಾಮಿ ಬಡಾವಣೆಯಲ್ಲಿರುವ ವಾಲ್ಮೀಕಿ ದೇಗುಲದಲ್ಲಿ ಮಹರ್ಷಿ ವಾಲ್ಮೀಕಿಯವರ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ತಹಶೀಲ್ದಾರ ರ ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ರವರು ಪರಿಶಿಷ್ಟ ಪಂಗಡದ ಮೀಸಲಾತಿಯನ್ನ 7.5 ಕ್ಕೆ ಹೆಚ್ಚಿಸಬೇಕು. ಹಾಗೂ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು […]

Continue Reading
IMG 20201029 WA0011

ಪಾವಗಡ: ನೂತನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಧಿಕಾರ ಸ್ವೀಕಾರ….!

ಪಾವಗಡದ ಲೋಕೋಪಯೋಗಿ ಇಲಾಖೆಗೆ ನೂತನವಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಅನಿಲ್ ಕುಮಾರ್ ರವರು ಅಧಿಕಾರ ಸ್ವೀಕಾರ ಮಾಡಿದರು. ಹತ್ತು ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಅಧಿಕಾರಿ ಅನಿಲ್ ಕುಮಾರ್ ರವರು ಚಳ್ಳಕೆರೆಯಲ್ಲಿ ಎ.ಇ.ಇ ಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಪಾವಗಡದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ಸ್ವೀಕರಿಸಿರುವುದು ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಎ .ಇ.ಇ ಅನಿಲ್ ಕುಮಾರ್ ರವರು ಲೋಕೋಪಯೋಗಿ ಇಲಾಖೆಯಲ್ಲಿನ ಕಾಮಗಾರಿಗಳು ಅತಿ ಗುಣಮಟ್ಟದಿಂದ ಕೂಡಿರುವಂತೆ ಎಚ್ಚರವಹಿಸುತ್ತ […]

Continue Reading
IMG 20201029 WA0008

ಪಾವಗಡ: ಟೆನಿಸ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ…!

ಪಾವಗಡ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಟೆನಿಸ್ ಕ್ರಿಕೆಟ್ ಟೂರ್ನಿಮೆಂಟ್ ನ್ನ ಗ್ರಾಮಸ್ಥರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು. ಆಧುನಿಕ ಜಗತ್ತು ಬೆಳೆದಂತೆ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ಹಾಗೂ ಯುವಕರಲ್ಲಿನ ಕ್ರೀಡೆಯ ಆಸಕ್ತಿ ಕಳೆಗುಂದುತ್ತಿದೆ, ಆದರೆ ಈ ಗ್ರಾಮದಲ್ಲಿ ಯುವಕರಿಗೆ ಗ್ರಾಮಸ್ಥರು ಕ್ರೀಡಾ ಚಟುವಟುಕೆಗಳಲ್ಲಿ ಭಾಗವಹಿಸುವಂತೆ ಚೈತನ್ಯ ತುಂಬುತ್ತಿರೋದು ನಿಜಕ್ಕೂ ಮಾದರಿಯಾಗಿದೆ. ತಾ.ಪಂ.ಸದಸ್ಯರು ಮತ್ತು ಮಾಜಿ ಕಬ್ಬಡ್ಡಿ, ಕ್ರಿಕೆಟ್ ಕ್ರೀಡಾಪಟುವಾಗಿದ್ದ ಅಂಜನ್ ನಾಯಕರವರು ಮಾತನಾಡುತ್ತ ಇಂದಿನ ಯುವ ಶಕ್ತಿ ಮಾನಸಿಕವಾಗಿ ದೈಹಿಕವಾಗಿ ಬಲಗೊಳ್ಳಬೇಕಾದರೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು. ನಿಮ್ಮ […]

Continue Reading
IMG 20201027 WA0056

ಮಡದಿಯ ಮೋಹಕ್ಕೆ ಗಂಡನ ಅಡ್ಡಿ, ಖಲಾಸ್..!

ವೈ ಎನ್ ಹೊಸಕೋಟೆ  ಯ ಆಂಧ್ರ ಗಡಿ: ಮಡದಿಯ ಮೋಹಕ್ಕೆ ಗಂಡನ ಅಡ್ಡಿ, ಖಲಾಸ್..! ಪಾವಗಡ :-  ಅಕ್ಟೋಬರ್ 1 ನೇ ತಾರೀಖು ಪಾವಗಡದ ವೈ ಎನ್ ಹೊಸಕೋಟೆ ಹೋಬಳಿಯ ಮಂದಿ ಪ್ರಶಾಂತಮಯವಾಗಿದ್ದರು. ಆದರೆ ಇದ್ದಕ್ಕಿದ್ದಂತೆ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಗೆ ಪೋನ್ ಕರೆಯೊಂದು ಬಂದು ಇಲ್ಲೊಂದು ಶವ ಬಿದ್ದಿದೆ ಅನ್ನುವ ಸುದ್ದಿ ಯಾವಾಗ ರವಾನೆಯಾಯ್ತೊ ವೈ ಎನ್ ಹೊಸಕೋಟೆ ಪೊಲೀಸರು ಅಲರ್ಟ್ ಆಗಿ ಸಬ್ ಇನ್ಸ್ಪೆಕ್ಟರ್ ರಾಮಯ್ಯ ಸಾಹೇಬ್ರ ನಿರ್ದೇಶನದಂತೆ ಎಎಸ್ಐ ಹನುಮಾನಾಯ್ಕ ಮತ್ತು ಸಿಬ್ಬಂಧಿಗಳು […]

Continue Reading
IMG 20201027 WA0035

ಜಯಚಂದ್ರ ಅವರನ್ನು ಗೆಲ್ಲಿಸಲು ಶಿರಾ ಮತದಾರರು ನಿರ್ಧರಿದ್ದಾರೆ; ಡಿ.ಕೆ.ಶಿ

  ತುಮಕೂರು :- ಕಾಂಗ್ರೆಸ್ ಹಾಗೂ ಟಿ.ಬಿ ಜಯಚಂದ್ರ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕೆಲಸಗಳನ್ನು ಮೆಚ್ಚಿರುವ ಶಿರಾ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಶಿರಾ ಕ್ಷೇತ್ರದ ಭೂವನಕಹಳ್ಳಿ, ಸೋರೆಗುಂಟೆ, ಪಂಜಿಗಾನಹಳ್ಳಿ, ದ್ವಾರಾಳು ಗೇಟ್, ಚನ್ನನಕುಂಟೆ, ಹೊನ್ನಗೊಂಡನಹಳ್ಳಿ, ಮಾಗೋಡು ಗೊಲ್ಲರಹಟ್ಟಿ, ಮಾಗೋಡು, ಯರಗುಂಟೆ ಗೇಟ್, ಗುಳಿಗೇನಹಳ್ಳಿ, ತಗ್ಗಿಹಳ್ಳಿ ಪದ್ಮಾಪುರ, ಯಲಿಯೂರು ಗೇಟ್ ಮತ್ತಿತರ ಕಡೆ ಅಭ್ಯರ್ಥಿ ಜತೆ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದ ಡಿ.ಕೆ […]

Continue Reading
IMG 20201027 WA0009

ಪಾವಗಡ: ನಿಡಗಲ್ ದಸರಾ ಉತ್ಸವ….!

  ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿ ವಾಲ್ಮೀಕಿ ಜಾಗೃತಿ ವೇದಿಕೆ ಹಾಗೂ ಮಹರ್ಷಿ ವಾಲ್ಮೀಕಿ ಆಶ್ರಮದ ನೇತೃತ್ವದಡಿಯಲ್ಲಿ ನಿಡಗಲ್ ದಸರಾ ಉತ್ಸವ ವನ್ನು ವಿಶೇಷವಾಗಿ ಆಚರಿಸಲಾಯಿತು. ಹಿಂದೆ ರಾಜ ಮಹಾರಾಜರ ಕಾಲದಿಂದಲೂ ನಿಡಗಲ್ ಸಂಸ್ಥಾನದಲ್ಲಿ ನಿಡಗಲ್ ದಸರಾ ಉತ್ಸವ ಪ್ರಾತಿನಿಧ್ಯ ಪಡೆದುಕೊಂಡಿತ್ತು.ಆದರೆ ಕಾಲಕ್ರಮೇಣ ಈ ಒಂದು ಉತ್ಸವ ಕಣ್ಮರೆಯಾಗತೊಡಗಿತ್ತು. ಇಂದು ಸಾಂಪ್ರದಾಯಿಕವಾಗಿ ನಡೆಸಲಾದ ನಿಡಗಲ್ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶ್ರೀ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷರು ಸಂಜಯ್ ಕುಮಾರ ಸ್ವಾಮೀಜಿಗಳು ದಸರಾ ನವರಾತ್ರಿ ಉತ್ಸವಕ್ಕೆ […]

Continue Reading