ab90ba23 af46 4039 af69 484b9451c783

ಪಾವಗಡ: ಸರಳವಾದ ರೀತಿಯಲ್ಲಿ. 534 ನೇ ಕನಕ ಜಯಂತಿ ಆಚರಣೆ…!

ಸರಳವಾದ ರೀತಿಯಲ್ಲಿ. 534 ನೇ ಕನಕ ಜಯಂತಿ ಆಚರಣೆ. ಪಟ್ಟಣದ ಹೊರವಲಯದ ವೆಂಕಟಾಪುರ ಕ್ರಾಸ್ ಬಳಿ ಇರುವ ಕನಕ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸರಳವಾದ ರೀತಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ಮನು ಮಹೇಶ್ ಮಾತನಾಡುತ್ತಾ. ಕೋವಿಡ್ ನಿಯಮ ಇರುವುದರಿಂದ ಕನಕದಾಸರ ಜಯಂತಿಯನ್ನು ಸರಳವಾದ ರೀತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತೆಂದು ಮುಂಬರುವ ದಿನಗಳಲ್ಲಿ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರನ್ನು ಕರೆಸಿ ಕನಕದಾಸರ […]

Continue Reading
IMG 20211121 WA0019

ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ…!

* ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ* *ಜನಶಕ್ತಿ, ರೈತ ಶಕ್ತಿಗೆ ಹೆದರಿ ಕೇಂದ್ರ ಸರಕಾರ ಯೂಟರ್ನ್* ತುಮಕೂರು ನ 21 :-  ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಈ ದೇಶಕ್ಕೆ ಸಲ್ಲಿಸಿರುವ ಸೇವೆಗೆ ದೊಡ್ಡ ಇತಿಹಾಸವಿದೆ. ಈ ದೇಶದ ಧ್ವಜದ ಮೂಲ ಹಕ್ಕುದಾರರು ನಾವು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಗಾಂಧೀಜಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಸೇವೆ ಅನುಪಮ. ಸೋನಿಯಾ ಗಾಂಧಿ ಅವರ ಸೂಚನೆ […]

Continue Reading
IMG 20211121 WA0008

ಪಾವಗಡ: ಮಳೆ ಗೆ ಹಾನಿಗೊಳಗಾದ ಮನೆ ಪರಿಶೀಲನೆ…!

ಇಂದು ಪಾವಗಡ ತಹಶಿಲ್ದಾರ್ ಕೆ.ಆರ್ ನಾಗರಾಜ್ ಮತ್ತು. ಸಿಬ್ಬಂದಿಯವರು ಮಳೆಯಿಂದ ಹಾನಿಗೊಳಗಾದ ಕಡಮಲಕುಂಟೆ ಗ್ರಾಮದ ಆಂಜನಪ್ಪ ಅವರ ಮನೆಗೆ ಭೇಟಿ ನೀಡಿ ಮಳೆಯಿಂದ ಸಂಪೂರ್ಣವಾಗಿ ಬಿದ್ದು ಹೋಗಿರುವ ಮನೆಯನ್ನು ಪರಿಶೀಲಿಸಿದರು. ಅಂಜಿನಪ್ಪ ಮತ್ತು ಅವರ ಹೆಂಡತಿ ಓಬಳಮ್ಮ ಕಡಮಲಕುಂಟೆಯ ಗ್ರಾಮದಲ್ಲಿ ಸುಮಾರು ವರ್ಷಗಳ ವಾಸವಿದ್ದು. ಅವರಿಗೆ ವಾಸಿಸಲು ಯೋಗ್ಯ ಮನೆಯು ಇಲ್ಲದಂತಾಗಿದೆ. ಎಷ್ಟೇ ಸರ್ಕಾರಗಳು ಬಂದು ಹೋದರು . ಬಡಜನರ ಮಾತ್ರ ಇಂದಿಗೂ ಬಡವರಾಗಿಯೇ ಉಳಿದಿದ್ದಾರೆ ಎಂಬುದಕ್ಕೆ ಆಂಜಿನಪ್ಪನವರ ಕುಟುಂಬ ಜೀವಂತ ಉದಾಹರಣೆಯಾಗಿದೆ. ಈ ವೃದ್ಧ ದಂಪತಿಗಳಿಗೆ […]

Continue Reading
IMG 20211120 WA0033

ಪಾವಗಡ: ತುಂಬಿ ಹರಿಯುತ್ತಿರುವ ಉತ್ತರ ಪಿನಾಕಿನಿ….!

ಪಾವಗಡ : ತಾಲೂಕಿನ ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆ ಶಾಸಕ ವೆಂಕಟರವಣಪ್ಪ ಶನಿವಾರ ಬಾಗಿನ ಸಮರ್ಪಿಸಿದರು. ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡ್ಯಾಂ ನಿರ್ಮಾಣದ ವೇಳೆ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೇ ಸುಮಾರು 12 ಕೋಟಿ ರೂ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಪೂರ್ಣಗೊಳಿಸಲಾಯಿತು. ಇದೀಗ ಚೆಕ್ ಡ್ಯಾಂ ನಿಂದ ನಾಗಲಮಡಿಕೆ ಹೋಬಳಿ ಜನತೆಗೆ ಅನುಕೂಲವಾಗುತ್ತಿದೆ ಎಂದರು. ಅಂತರ್ಜಲ ವೃದ್ಧಿಯಾಗಿ, ನೀರಿನಲ್ಲಿದ್ದ ಫ್ಲೋರೈಡ್ ಅಂಶ ಕಡಿಮೆಯಾಗಿದೆ. ಪೈಪ್ ಲೈನ್ ಮೂಲಕ ಪಟ್ಟಣಕ್ಕೆ […]

Continue Reading
20211120 164924

ಬಿಜೆಪಿ ಗೆಲ್ಲಿಸಿ, ಹೊಸ ದಾಖಲೆ ಬರೆಯಿರಿ….!

*ಬಿಜೆಪಿ ಗೆಲ್ಲಿಸಿ, ಹೊಸ ದಾಖಲೆ ಬರೆಯಿರಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್* *ಕಾಂಗ್ರೆಸ್ ಎಂದರೆ ಕುಟುಂಬ ರಾಜಕಾರಣ, ಶ್ರೀನಿವಾಸಪುರದ ನಾಟಕ ಕಂಪನಿ ಬಂದ್ ಮಾಡೋಣ* *ಕೋಲಾರ, ನವೆಂಬರ್ 20, :- ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಲವೆಡೆ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಈಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ಬಿಜೆಪಿಯನ್ನು ಗೆಲ್ಲಿಸಿ ಹೊಸ ದಾಖಲೆ ಬರೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮಾಲೂರಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ […]

Continue Reading
IMG 20211119 WA0057

ಪಾವಗಡ- ವರುಣನ ಆರ್ಭಟಕ್ಕೆ ಜನ ಜೀವನ ಅಸ್ತ- ವ್ಯಸ್ತ….!

ಇಂದು ಪಾವಗಡ ತಾಲೂಕಿನಾದ್ಯಂತ ಸುರಿದ ಮಳೆಯ ಪರಿಣಾಮ ಕೆರೆ-ಕುಂಟೆಗಳು ನೀರಿನಿಂದ ತುಂಬಿದ್ದು ತಾಲೂಕಿನಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿತ್ತು. ವೆಂಕಟಾಪುರ —-ಹಲವಾರು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಮಣಿ ಮುಕ್ತಾವತಿ ನದಿಯು ಇಂದು ಸುರಿದ ಮಳೆಯ ಪರಿಣಾಮದಿಂದಾಗಿ ಮಣಿ ಮುಕ್ತಾವತಿ ನದಿಯು ಪ್ರವಾಹದಂತೆ ಹರಿಯಿತು ಪರಿಣಾಮ ಬತ್ತಿಹೋದಂತಹ ಬೋರ್ವೆಲ್ ಗಳಿಗೆ ಮರು ಜೀವ ಬಂದಂತಾಯಿತು ಎಂದು ವೆಂಕಟಾಪುರದ ಸತ್ಯಪ್ರಕಾಶ್ ತಿಳಿಸಿದರು. ಬಾಲಮ್ಮ ನಹಳ್ಳಿ ——. ಇಂದು ಸುರಿದ ಮಳೆಯ ಪರಿಣಾಮ ಗುಂಡಾರ್ಲಹಳ್ಳಿಯ ಕೆರೆ ತುಂಬಿ ಹರಿಯಿತು ಪರಿಣಾಮವಾಗಿ ಬಾಲಮ್ಮ […]

Continue Reading
IMG 20211118 WA0025

ಪಾವಗಡ: ಮದ್ಯದ ಅಂಗಡಿ ಸ್ಥಳಾಂತರಿಸಲು ಆಗ್ರಹಿಸಿ ಪ್ರತಿಭಟನೆ….!

 ಪಾವಗಡ: -ಅರಸೀಕೆರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ವ್ಯಾಪ್ತಿಯ ಗ್ರಾಮಸ್ಥರು, ಮುಖಂಡರು, ಮಹಿಳಾ ಸಂಘಟನೆಗಳು  ಸೇರಿ ಅರಸೀಕೆರೆ ಗ್ರಾಮದಲ್ಲಿರುವ ಶ್ರೀಮಾತಾ ವೈನ್ ಸೆಂಟರ್ ಅನ್ನು ಊರಿನಿಂದ ಹೊರಗೆ ಸ್ಥಳಾಂತರಿಸಲು ಅರಸೀಕೆರೆ ಗ್ರಾಮದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಪ್ರತಿಭಟನೆ ಮಾಡುವ ಸ್ಥಳಕ್ಕೆ ಪಾವಗಡ ಅಬಕಾರಿ ಇಲಾಖೆ ಅಧಿಕಾರಿಗಳು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು ಅನಂತರ ಮಾತನಾಡಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಇನ್ನು ಎರಡು ತಿಂಗಳೊಳಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಅರಸೀಕೆರೆ ಗ್ರಾಮದ  ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ಹಾಗೂ […]

Continue Reading
IMG 20211117 WA0050

ಪಾವಗಡ: ಮಳೆಯಿಂದ ಕೆಲವೆಡೆ ಬೆಳೆ ಹಾನಿ….!

ಪಾವಗಡ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಬಿದ್ದ ಮಳೆಯಿಂದ ಕೆಲವೆಡೆ ಬೆಳೆ ಹಾನಿಯಾಗಿದೆ. ತಾಲ್ಲೂಕಿನ ಸುಂಕಾರ್ಲಕುಂಟೆ ಪದ್ಮಾವತಿ ಎಂಬುವರ 3 ಎಕರೆ ಜಮೀನಿನಲ್ಲಿ ಬೆಳೆಯಲಾದ ಮೆಕ್ಕೆ ಜೋಳ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಸುಮಾರು 2 ಲಕ್ಷ ರೂ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಗುಂಡ್ಲಹಳ್ಳಿ ಗ್ರಾಮದ ಲಿಂಗಾನಾಯಕ ಅವರ 12 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಶೇಂಗಾ ಸಂಪೂರ್ಣ ಹಾನಿಯಾಗಿದೆ. ಮೇವಿಗೆ ಬರುತ್ತಿದ್ದ ಶೇಂಗಾ ಬಳ್ಳಿಯೂ ಸಹ ಹಾಳಾಗಿದೆ. ಸುಮಾರು 3 ಲಕ್ಷ ನಷ್ಟವಾಗಿರುವುದಾಗಿ ರೈತ ತಿಳಿಸಿದ್ದಾರೆ. ಮಳೆಯಿಂದ ಕಡಮಲಕುಂಟೆ […]

Continue Reading
17 11 21 Ramanashree Award presented to Swami Japanandaji 2

ಪಾವಗಡ: ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಪ್ರತಿಷ್ಠಿತ ರಮಣಶ್ರೀ ಶರಣ ಪ್ರಶಸ್ತಿ….!

ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಪ್ರತಿಷ್ಠಿತ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಬೆಂಗಳೂರು: –  ನಗರದ ಪ್ರತಿಷ್ಠಿತ ಹೋಟೆಲ್ ಆದ ರಮಣಶ್ರೀ ರಿಚ್ಮಂಡ್‍ನ ಅದ್ಧೂರಿ ಸಭಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು “ರಮಣಶ್ರೀ ಶರಣ ಪ್ರಶಸ್ತಿಯನ್ನು” ಪ್ರದಾನ ಮಾಡಿದರುಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ, ಫಲಕ ಹಾಗೂ ಗೌರವ ಸಮರ್ಪಣೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೆರೆದ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಹಾಗೂ ಶ್ರೀ ರಮಣಶ್ರೀ […]

Continue Reading
images 16

ಪಾವಗಡ: ಮಹಿಳೆ ಬರ್ಬರ ಹತ್ಯೆ…!

ಪಾವಗಡ: ತಾಲ್ಲೂಕಿನ ಮುರಾರಾಯನಹಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ ಮಹಿಳೆಯೋರ್ವರನ್ನು ಹತ್ಯೆ ಮಾಡಲಾಗಿದೆ. ಇದೇ ಗ್ರಾಮದ ಲಕ್ಷ್ಮಿನರಸಮ್ಮ(52) ಹತ್ಯೆಗೀಡಾದವರು. ಕುತ್ತಿಗೆಗೆ ವೈರ್ ಬಿಗಿದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಮಹಿಳೆಗೆ ಸೇರಿದ ಕುರಿಗಳು ಗಾಬರಿಗೊಂಡು ಕೂಗುವುದನ್ನು ಕೇಳಿಸಿಕೊಂಡು ನೆರೆ ಹೊರೆಯವರು ಸ್ಥಳಕ್ಕೆ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ನರಳಾಡುವುದನ್ನು ಗಮನಿಸಿ, ನೀರು ಕುಡಿಸಿ ಮಹಿಳೆಯನ್ನು ರಕ್ಷಿಸಲು ಗ್ರಾಮಸ್ಥರು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಸಿಬ್ಬಂದಿ ಸ್ಥಳ […]

Continue Reading