IMG 20201013 WA0005

ಸಂಕಷ್ಟದಲ್ಲಿ ಅನ್ನದಾತ : ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….!

ಸಂಕಷ್ಟದಲ್ಲಿ ಅನ್ನದಾತ ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….! ಪಾವಗಡ :-  ರಾಜ್ಯದಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗಿದ್ದರಿಂದ ಮತ್ತು ಕೊರೋನಾ ಸೋಂಕಿನ ಕಾರಣದಿಂದ ನಗರ ಜೀವನ ಬಿಟ್ಟು ಸ್ವಂತ ಊರುಗಳಿಗೆ ಹೋದ ಬಹಳಷ್ಟು ಮಂದಿ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಮುಂದಾದ ಕಾರಣ ಎಲ್ಲೆಡೆ ಬೆಳೆಗಳು ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಹಲವೆಡೆ ಶೇಂಗಾ ಬೆಳೆ ಕಟಾವು ಹಾಗುತ್ತಿದೆ ಆದರೆ ಬೆಲೆಗಳು ಮಾತ್ರ ಕುಸಿದಿದೆ,ಕೇಂದ್ರ ಸರ್ಕಾರ 2020-21 ರ ಸಾಲಿನ ಶೇಂಗಾ ಬೆಳೆಯ ಮುಂಗಾರು ಕಟಾವಿನ ಬೆಂಬಲ […]

Continue Reading
IMG 20201021 WA0024

ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ…!

*ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಡಿ.ಕೆ ಶಿವಕುಮಾರ್* ತುಮಕೂರು: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು ಹಿಂದೆಯೂ ಹೋಗಿಲ್ಲ, ಈಗಲೂ ಹೋಗುವುದಿಲ್ಲ. ಒಬ್ಬರು ಪ್ರವಾಹ ಬಂದಿಲ್ಲ ಅಂತಾರೆ, ಮತ್ತೊಬ್ಬರು ಆರೋಗ್ಯ ಸರಿ ಇಲ್ಲ ಅಂತಾರೆ, ಮತ್ತೊಬ್ಬರು ತಮಗೆ ಸಮಸ್ಯೆ ಇದೆ ಅಂತಾರೆ. ಇನ್ನು ಶಿರಾದಲ್ಲಿ ರೈತರು ಬೆಳೆದ ಕಡಲೆಕಾಯಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. […]

Continue Reading
IMG 20201021 WA0000

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದೇಶ ಶಿರಾದಿಂದಲೇ ರವಾನೆ…!

ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದೇಶ ಶಿರಾದಿಂದಲೇ ರವಾನೆ: ಡಿ.ಕೆ ಶಿವಕುಮಾರ್ ತುಮಕೂರು: ಈ ಉಪಚುನಾವಣೆಯಿಂದ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ಬೀಳುವುದಿಲ್ಲ. ಆದರೆ ಶಿರಾ ಕ್ಷೇತ್ರದ ಜನ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶವನ್ನು ರವಾನಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಾ ಉಪಚುನಾವಣೆ ನಿಮಿತ್ತ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಮಂಗಳವಾರ ತೆರಳಿ ವ್ಯಾಪಕ ಪ್ರಚಾರ ನಡೆಸಿದ ಡಿ.ಕೆ ಶಿವಕುಮಾರ್ ಅವರು ಒಟ್ಟಾರೆ ಹೇಳಿದ್ದಿಷ್ಟು: ‘ನಾಮಪತ್ರ ಸಲ್ಲಿಸಿದ […]

Continue Reading
IMG 20201019 WA0017

ಆಗ್ನೇಯ ಪದವೀಧರ ಕ್ಷೇತ್ರ ದ ಜೆಡಿಎಸ್ ಅಭ್ಯರ್ಥಿ ಬಿರುಸಿನ ಪ್ರಚಾರ…!

ಪಾವಗಡ ಅ 19: –  ನಗರದ  ಕಣಿವೆ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿಂದು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್ .ಚೌಡರೆಡ್ಡಿ ತೂಪಲ್ಲಿ ರವರು ಚುನಾವಣಾ ಪ್ರಚಾರ ಸಭೆಯನ್ನ ಏರ್ಪಡಿಸಿದ್ದರು. ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅನುಭವಿ ನಾಯಕ ಆರ್.ಚೌಡರೆಡ್ಡಿ ತೂಪಲ್ಲಿ ರವರು ನಾನು ಕಳೆದ 6 ವರ್ಷಗಳ ಅಧಿಕಾರದ ಅವಧಿಯಲ್ಲಿ ಎಲ್ಲಿಯೂ ಕೂಡ ಶಿಕ್ಷಕರಿಗಾಗಲಿ, ಜನ ಸಾಮಾನ್ಯರಿಗಾಗಲಿ ಸುಳ್ಳು ಭರವಸೆಗಳನ್ನ ನೀಡಿಲ್ಲ. ಜೊತೆಗೆ ಕಾಲಹರಣ ಮಾಡದೆ ಸದಾ ಜನ ಸೇವೆಯಲ್ಲಿ ತಲ್ಲಿನ ನಾದವನು ಆಗಾಗಿ ಮತ್ತೊಮ್ಮೆ ಬುದ್ದಿವಂತ […]

Continue Reading
18 10 20 Relief work SRKS PVG 1

ಪಾವಗಡ: ನೆರೆಸಂತ್ರಸ್ಥರ ನೆರವಿಗೆ ರಾಮಕೃಷ್ಣ ಸೇವಾಶ್ರಮ…!

ಕಲ್ಯಾಣ ಕರ್ನಾಟಕ ದಲ್ಲಿ ಉಂಟಾಗಿರುವ ಪ್ರವಾಹ  ಪರಿಸ್ಥಿತಿ ಯಿಂದ  ಸಂಕಷ್ಟಕ್ಕೆ  ಸಿಲುಕಿರುವ ಜನರ ನೆರವಿಗೆ ಬಂದಿದೆ.ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಪೌಂಡೇಶನ್. ಮಸ್ಕಿ, ಹುಕ್ಕೇರಿ, ಯಾದಗಿರಿ, ಜೇವರ್ಗಿ ಮತ್ತು ರಾಯಚೂರು ಪ್ರದೇಶಗಳಲ್ಲಿನ ಪ್ರವಾಹ ಪೀಡಿತರಿಗೆ ಎಲ್ಲ ರೀತಿಯ ವಸ್ತುಗಳನ್ನು ಸಿದ್ದಪಡಿಸುತ್ತಿದ್ದ ದೃಷ್ಯ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಸೀರೆ, ಪಂಚೆ, ಟವೆಲ್, ಹೊದಿಕೆ, ಚಾಪೆ, ಸಕ್ಕರೆ, ಅಕ್ಕಿ ಹೀಗೆ ಎಲ್ಲ ಅಡುಗೆ ಸಾಮಾನುಗಳ ಚೀಲಗಳನ್ನು ಸಿದ್ದಪಡಿಸುತ್ತಿದ್ದಾರೆ. ಇದು ಶ್ರೀಮತಿ ಸುಧಾಮೂರ್ತಿ ರವರ ಹೃದಯ ವೈಶಾಲ್ಯದ ಸೇವೆ ಎನ್ನಬಹುದು. ಇದರೊಂದಿಗೆ […]

Continue Reading
IMG 20201018 WA0005

ಪಾವಗಡ: ವರದಿಗಾರರ ಸಂಘ ದ ಶಾಖೆ ಆರಂಭ…!

ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ನೇತೃತ್ವದಲ್ಲಿ ಸಂಘದ ತಾಲ್ಲೂಕು ಘಟಕದ ಶಾಖೆಯ ಉದ್ಘಾಟನೆ ಕಾರ್ಯಕ್ರಮವನ್ನು ಪಾವಗಡ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿಂದು ಆಯೋಜನೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕರ್ನಾಟಕ ಸಂಪಾದಕ ಮತ್ತು ವರದಿಗಾರ ರ ಸಂಘದ ರಾಜ್ಯಾಧ್ಯಕ್ಷ ವಿಷ್ಣುರವರು ಮಾತನಾಡುತ್ತ…. ನಮ್ಮ ಈ ಸಂಘ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೇರುಬಿಟ್ಟಿದೆ. ಇಂದಿನ ಪತ್ರಿಕೋದ್ಯಮದಲ್ಲಿ ಜಾತಿ ಬೇಧ ಭಾವ, ಸಣ್ಣ ಪತ್ರಿಕೆ ದೊಡ್ಡ ಪತ್ರಿಕೆಗಳೆಂಬ ಅಸ್ಪೃಶ್ಯತೆಯ ತುಚ್ಚ ವ್ಯತಿರಿಕ್ತ ಭಾವನೆಗಳಿಗೆ ತುತ್ತಾದ ಪತ್ರಕರ್ತರನ್ನು ಸಂಘಟಿಸಿ […]

Continue Reading
IMG 20201008 WA0015 1

ಪಾವಗಡ :- ವಿ.ಎಸ್.ಎಸ್.ಎನ್ ಸಂಘ ಕ್ಕೆ ಅಧ್ಯಕ್ಷರ ಆಯ್ಕೆ…!

  ಪಾವಗಡ:- ವಿ.ಎಸ್.ಎಸ್.ಎನ್ ಅಧ್ಯಕ್ಷರ ಆಯ್ಕೆ ವೈ.ಎನ್.ಹೊಸಕೋಟೆ : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರದಂದು ಚುನಾವಣೆ ನಡೆಯಿತು. ಒಟ್ಟು ೧೧ ನಿರ್ದೇಶಕರನ್ನು ಒಳಗೊಂಡ ಸಮಿತಿಯ ಅಧ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಗಳಿಗೆ ಒಬ್ಬೊಬ್ಬರನ್ನು ಹೊರತಾಗಿ ಮತ್ತಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಷಂಷುದ್ದೀನ್ ಮತ್ತು ಉಪಾಧ್ಯಕ್ಷರಾಗಿ ಹೆಚ್.ಓ.ಗೋಪಾಲ್ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಸೌಮ್ಯ ಘೋಶಿಸಿದರು. ಈ ಸಂದರ್ಭದಲ್ಲಿ ಉಳಿದ ನಿರ್ದೇಶಕರು ಮತ್ತು ಮುಖಂಡರು ಹಾಜರಿದ್ದರು. ಬೆಂಬಲಿಗರು […]

Continue Reading
IMG 20201005 WA0018

ಪಾವಗಡ: ಆಗ್ನೇಯ ಕ್ಷೇತ್ರದ ಪಧವೀದರರ ಚುನಾವಣೆ ತಯಾರಿ…!

ಪಾವಗಡ: ತಾಲ್ಲೂಕು ಬಿಜೆಪಿ ಪಕ್ಷದ ಮಂಡಳಿ ವತಿಯಿಂದ ಆಗ್ನೇಯ ಕ್ಷೇತ್ರದ ಪಧವೀದರರ ಚುನಾವಣೆಯ ಪೂರ್ವಭಾವಿ ಸಭೆಯ ಪತ್ರಿಕಾಗೋಷ್ಟಿಯನ್ನು ಪಾವಗಡ ಪಟ್ಟಣದ ಆಂಧ್ರಗಿರಿ ಭವನದಲ್ಲಿ ನಡೆಸಲಾಯಿತು. ಇದೇ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಎಂ ಎಲ್ ಸಿ ನಾರಾಯಣ ಸ್ವಾಮಿಯವರು ಇವತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಪಕ್ಷ ಎಂದರೆ ಅದು ಬಿಜೆಪಿ ಸರ್ಕಾರ ಮಾತ್ರ.ಮುಂದಿನ ದಿನಮಾನಗಳಲ್ಲಿ ಯುವಕರಿಗೆ ಉದ್ಯೋಗ, ಶಿಕ್ಷಕರಿಗೆ ಉತ್ತಮ ಸ್ಥಾನ ಮಾನ ಹೀಗೆ ನಾನಾ ರೀತಿಯ ಯೋಜನೆಗಳನ್ನು ನೀಡಲು ಸಿದ್ದವಾಗಿದೆ.ಆ ಹಿನ್ನೆಲೆಯಲ್ಲಿಯೇ ಬಿಜೆಪಿ ಪಕ್ಷ ಅಧಿಕೃತವಾಗಿ ಚಿದಾನಂದ […]

Continue Reading
IMG 20200928 WA0000

ಪಾವಗಡ: ವಿ.ಎಸ್.ಎಸ್.ಎನ್ ಸೊಸೈಟಿ ಗೆ ಚುನಾವಣೆ…!

ವಿ.ಎಸ್.ಎಸ್.ಎನ್ ಚುನಾವಣೆ ವೈ.ಎನ್.ಹೊಸಕೋಟೆ : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಮುಂದಿನ  ಐದು ವರ್ಷಗಳ ಅವಧಿಗೆ ಭಾನುವಾರದಂದು ಆಡಳಿತ ಮಂಡಲಿಯ ಚುನಾವಣೆ ನಡೆಯಿತು. ಒಟ್ಟು ೧೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ವರ್ಗದ ೫ ಸ್ಥಾನಗಳಿಗೆ ಟಿ.ವಿ.ವೆಂಕಟೇಶ್, ವೈ.ಸತ್ಯನಾರಾಯಣಪ್ಪ, ಪಿ.ಹೆಚ್.ಶಿವಾನಂದರೆಡ್ಡಿ, ಷಂಶುದ್ಧೀನ್ ಮತ್ತು ಎಂ.ಜಿ.ಪಾತಣ್ಣ, ಸಾಮಾನ್ಯ ವರ್ಗದ ೨ ಮಹಿಳಾ ಸ್ಥಾನಗಳಿಗೆ ಲಲಿತಮ್ಮವೆಂಕಟೇಶ್(ಯಾದಗಿರಿ) ಮತ್ತು ರತ್ನಮ್ಮಬಲರಾಮನಾಯಕ, ಪರಿಶಿಷ್ಟ ಪಂಗಡದ ಸಾಮಾನ್ಯ ವರ್ಗದ ೧ ಸ್ಥಾನಕ್ಕೆ ಹೆಚ್.ಓ.ಗೋಪಾಲ, ಹಿಂದುಳಿದ ವರ್ಗದ ೨ […]

Continue Reading
IMG 20200927 WA0000

ಪಾವಗಡ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಆಗ್ರಹ…!

  : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಆಗ್ರಹ…! ಪಾವಗಡ: ಕೊರಮ, ಕೊರಚ, ಲಂಬಾಣಿ, ಭೋವಿ ಸಮಾಜಗಳಿಗೆ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯಲ್ಲಿ ಸಮಾನ ನ್ಯಾಯ ನೀಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿ ಪಾವಗಡ ತಾಲ್ಲೂಕಿನ ಕೊಲಂಬೊ ನೌಕರರ ಒಕ್ಕೂಟದವರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಿದರು. ಇದೇ ಸಂದರ್ಭದಲ್ಲಿ ಕೊಲಂಬೊ ನೌಕರರ ಒಕ್ಕೂಟದ ಅಧ್ಯಕ್ಷ ಎಸ್ಸಾರ್ ಪಾಳ್ಯದನ್ಮಂತ್ರಾಯ ಮಾತನಾಡುತ್ತ ಇಂದು ಸಮಾಜದಲ್ಲಿ ಕೊರಮ ಕೊರಚ ಲಂಬಾಣಿ ಭೋವಿ ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನೆಲೆನಿಲ್ಲುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಹೊಲೆಯ […]

Continue Reading