IMG 20220809 WA0041

ಮಧುಗಿರಿ:ಅರೋಗ್ಯವಂತ ಸಮಾಜ ನಿರ್ಮಾಣ ಯುವಕರ ಕೈಯಲ್ಲಿದೆ…!

ಮಧುಗಿರಿ – ಉತ್ತಮವಾದ ಅರೋಗ್ಯವಂತ ಸಮಾಜ ನಿರ್ಮಾಣ ಯುವಕರ ಕೈಯಲ್ಲಿದೆ ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ತಾಲೂಕಿನ ಐ ಡಿ ಹಳ್ಳಿ ಹೋಬಳಿಯ ತಾಡಿ ಗ್ರಾಮದ ಶ್ರೀ ವೀರನಾಗಮ್ಮ ದೇವಾಲಯದ ಆವರಣದಲ್ಲಿ ತುಮಕೂರು ವಿಶ್ವ ವಿದ್ಯಾನಿಲಯ ಹಾಗೂ ಟಿ.ವಿ.ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಹಾಗೂ ವಿಶೇಷ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ […]

Continue Reading
IMG 20220809 WA0003

ಮಧುಗಿರಿ:ವೀರಾಂಜನೇಯ ಸ್ವಾಮಿ ದೇವಸ್ಥಾನ ಕ್ಕೆ ಕಳಸ ಪ್ರತಿಷ್ಠಾಪನೆ….!

*ಲಕ್ಷ್ಮಿಪುರ ದಂಡಿನ ದಿಬ್ಬ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ….., ಮಧುಗಿರಿ ತಾಲೂಕು ಲಕ್ಷ್ಮೀಪುರ ಮತ್ತು ದಂಡಿನ ದಿಬ್ಬ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶಿಖರಕ್ಕೆ ಕಳಸ ಪ್ರತಿಷ್ಠಾಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳಸ ಪ್ರತಿಷ್ಠಾಪನ ಕಾರ್ಯಕ್ರಮ ಸೋಮವಾರ ಬೆಳಗ್ಗೆ 9:00 ರಿಂದ 10:40 ಒಳಗೆ ಸಲ್ಲಿಸುವ ಶುಭಕನ್ಯ ಲಗ್ನದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಕಾರ್ಯಕ್ರಮವನ್ನು ನೆರವೇರಿಸಲು ದೈವ ಪ್ರೇರಣೆಯ ಪ್ರಾಯಶ್ಚಿತ್ತ ಮಹಾಪೂರ್ಣಾಹುತಿ ಪುಷ್ಪಾರ್ಚನೆ ಮಹಾಮಂಗಳಾರತಿ ಆದ […]

Continue Reading
IMG 20220808 WA0040

ಆನೇಕಲ್:ಮಾದಿಗ ಮಹಾ ಸಭಾದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ….!

ಆನೇಕಲ್: ಸರ್ಜಾಪುರದ ರಾಜಗೋಪಾಲ್ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 09 ರಂದು ಮಂಗಳವಾರಸ್ವಾಭಿಮಾನಿ ಮಾದಿಗ ಮಹಾ ಸಭಾದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನ ಎಲ್ಲಾ ಮಾದಿಗ ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾದಿಗ ಸಮುದಾಯದ ಹಿರಿಯ ಮುಖಂಡರು ಉದಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸಮುದಾಯ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿಯನ್ನು ಕಾಣಬೇಕಾದಲ್ಲಿ ಸಮಾಜವು ಶೈಕ್ಷಣಿಕವಾಗಿ […]

Continue Reading
IMG 20220808 WA0005

ಮಧುಗಿರಿ:ಮಳೆ ನೀರಿಗೆ ಕೊಚ್ಚಿ ಹೋದ ದ್ಯಾವಪ್ಪ ಕುಟುಂಬಕ್ಕೆ ಪರಿಹಾರ

ಹನುಮಂತಪುರ ಗ್ರಾಮದಲ್ಲಿ ಮಳೆ ನೀರಿಗೆ ಕೊಚ್ಚಿ ಹೋದ ದ್ಯಾವಪ್ಪಬಿನ್ ನರಸಿಂಹಯ್ಯ ಕುಟುಂಬಕ್ಕೆ ಪರಿಹಾರ ಸಹಾಯಧನ ಮಾಡುತ್ತಿರುವ ವಿಧಾನಪರಿಷತ್ ಸದಸ್ಯರಾದ ಆ ರಾಜೇಂದ್ರ ರವರು……. ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಹಳ್ಳದಲ್ಲಿ ಕೊಚ್ಚಿ ಹೋದ ದ್ಯಾವಪ್ಪ ಬಿನ್ ನರಸಿಂಹಯ್ಯ ಅವರ ಮನೆಗೆ ಭೇಟಿ ನೀಡಿ ಅವರ ಸಂಬಂಧಿಗಳಿಗೆ ಆತ್ಮಸ್ಥೈರ್ಯ ತುಂಬಿ ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ನೀವು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ ಹೆದರಬೇಡಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಆ […]

Continue Reading
IMG 20220806 WA0081

ಮಳೆ ನಡುವೆಯೂ ಶನೈಶ್ಚರ ಸ್ವಾಮಿ  ದರ್ಶನಕ್ಕೆ ಮುಗಿಬಿದ್ದ ಭಕ್ತಾದಿಗಳು……!   

ಮಳೆ ನಡುವೆಯೂ ಶನೈಶ್ಚರ ಸ್ವಾಮಿ  ದರ್ಶನಕ್ಕೆ ಮುಗಿಬಿದ್ದ ಭಕ್ತಾದಿಗಳು……                      ಪಾವಗಡ:  ತಾಲೂಕಿನಾದ್ಯಂತ ರಣ ಮಳೆಯ ಆರ್ಭಟದಿಂದಾಗಿ ಕೆರೆಕಟ್ಟೆಗಳು ಒಡೆದು   ಮುಖ್ಯ ರಸ್ತೆಗಳೆಲ್ಲವೂ ಜಲಮಯವಾಗಿದ್ದು  ಶನಿವಾರದಂದು ಪಟ್ಟಣದ ಶನೈಶ್ಚರ ಸ್ವಾಮಿ ದರ್ಶನಕ್ಕೆ  ದೂರದ ಊರುಗಳಿಂದ  ಭಕ್ತಾದಿಗಳು ಆಗಮಿಸಿದ್ದರು. ಮಳೆ ನಡುವೆಯೇ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.  ಕಳೆದ ವಾರಕ್ಕಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಆಗಮಿಸಿದ್ದ ಪರಿಣಾಮ  ವಾಹನ ದಟ್ಟಣೆ ಹೆಚ್ಚಿತ್ತು.  ಶುಕ್ರವಾರ […]

Continue Reading
IMG 20220805 WA0031

ಆನೇಕಲ್:ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ಸಂವಾದ…!

ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ಸಂವಾದ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ಕಂಬಿ ಮೂರ್ತಿರವರ ಮನೆಯಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಮಾದಯ್ಯ ರವರು ಉದ್ಘಾಟನೆ ಮಾಡಿದರು.ಕಾರ್ಯಕ್ರಮದಲ್ಲಿ ವಿಶ್ವಚೇತನ ಕಾಲೇಜಿನ ಪ್ರಾಧ್ಯಾಪಕರಾದ ರವಿಕುಮಾರ್ ರವರು ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ದ ಬಗ್ಗೆ ವಿಚಾರ ಮಂಡಿಸಿ ಮಾತನಾಡಿದ ಅವರು ಹಬ್ಬಗಳು ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿವೆ ನೋಡುವ ದೃಷ್ಟಿ ವಿಶಾಲವಾಗಿರಬೇಕು ಎಂದು ತಿಳಿಸಿದರು. ಹಬ್ಬ ಹರಿದಿನಗಳು ಮನುಷ್ಯ ಸಂಬಂಧಗಳನ್ನು ಹೆಚ್ಚಿಸುತ್ತದೆ, ಉತ್ತಮ […]

Continue Reading
IMG 20220805 WA0025

ಪಾವಗಡ:ಮಳೆ ಆವಾಂತರ : ಪೆಟ್ರೋಲ್- ನೀರು ಬೆರಕೆ…!

. ಮಳೆ ಆವಾಂತರ : ಪೆಟ್ರೋಲ್ ಗೆ ನೀರು ಬೆರಕೆ…! ಪಾವಗಡ.. ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಮೇಲೆ  ತುಂಬಿ ಹರಿದ ನೀರು ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ಮಿಶ್ರಿತವಾಗಿರುವ ಘಟನೆ ತಾಲೂಕಿನ ವೈಎನ್ ಹೊಸಕೋಟೆಯ ಶ್ರೀ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.                                        ಗ್ರಾಹಕರೋಬ್ಬರು ಕ್ಯಾನ್ ನಲ್ಲಿ ಪೆಟ್ರೋಲ್ […]

Continue Reading
IMG 20220805 WA0006

ಮಧುಗಿರಿ:ಲಕ್ಲಲಹಟ್ಟಗ್ರಾಮಕ್ಕೆ ಸಂಪರ್ಕ ಸೇತುವೆ ಕುಸಿದಿ ಬಿದ್ದು ಸಂಚಾರಕ್ಕೆ ಅಡ್ಡಿ…..!

ಮಿಡಿಗೇಶಿಹೋಬಳಿ.ಲಕ್ಲಲಹಟ್ಟಗ್ರಾಮಕ್ಕೆ ಸಂಪರ್ಕ ಸೇತುವೆ ಕುಸಿದಿ ಬಿದ್ದು ಸಂಚಾರಕ್ಕೆ ಅಡ್ಡಿ.. ಮಧುಗಿರಿ ತಾಲೂಕು ಮಿಡಿಗೇಶಿಹೋಬಳಿ ಲಕ್ಲೇಲಹಟಿ ಗ್ರಾಮಕ್ಕೆ ಹೋಗಲು ಸಂಪರ್ಕ ಸೇತುವೆ ಕುಸಿದು ಬಿದ್ದು ತುಂಬಾ ತೊಂದರೆಯಾಗುತ್ತಿದ್ದನ್ನು ಮನಗಂಡಂತಹ ಗ್ರಾಮದ ಸಾರ್ವಜನಿಕರು ಮುಖಂಡರುಗಳು . ಮಧುಗಿರಿ ಪಾವಗಡ ಮುಖ್ಯ ರಸ್ತೆಗೆ. ಗ್ರಾಮಸ್ಥರೆಲ್ಲರೂ ರಸ್ತೆಗೆ ಬಂದು ಧರಣಿ ಕುಳಿತರು ಸಂಚಾರಕ್ಕೆ ತುಂಬಾ ಅಡಚಣೆಯಾಗಿ ಬಸ್ಸುಗಳು ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿದ್ದವು. ಲಕ್ಲೆ ಹಟ್ಟಿ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕುಸಿದು ಬಿದ್ದು ಸುಮಾರು ದಿನಗಳು ಕಳೆದರೂ ಸೇತುವೆಯ […]

Continue Reading
IMG 20220805 WA0010

ಮಧುಗಿರಿ:ಐ ಡಿಹಳ್ಳಿಯಲ್ಲಿ ಕೆರೆಗೆ ಬಾಗಿನ ಅರ್ಪಣೆ….!

ಐಡಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ ದಂಪತಿಯಿಂದ ಕೆರೆಗೆ ಬಾಗಿನ ಅರ್ಪಣೆ………… ಮಧುಗಿರಿ ತಾಲ್ಲೂಕ್ ಐಡಿ ಹಳ್ಳಿ ಗ್ರಾಮದ ಕೆರೆಯ ಮೈದುಂಬಿ ಹರಿಯುತ್ತಿರುವುದರಿಂದ ಸಾಂಪ್ರದಾಯಿಕವಾಗಿ ಕೆರೆಗೆ ಬಾಗಿನ ಅರ್ಪಣೆ ಮಾಡಬೇಕೆಂದು ಊರಿನ ಗ್ರಾಮಸ್ಥರ ಮುಖಂಡರ ಜೊತೆಗೂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ. ವಿಜಯಲಕ್ಷ್ಮಿ ದಂಪತಿಯೊಂದಿಗೆ . ಐ ಡಿಹಳ್ಳಿಯಲ್ಲಿ ಕೆರೆಗೆ ಬಾಗಿನ ಅರ್ಪಣಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಪೂಜಾ ಕಾರ್ಯಕ್ರಮ ನೆರವೇರಿಸಿದನಂತರ ಮಾತನಾಡಿದ ಎನ್ ನರಸಿಂಹ ರೆಡ್ಡಿ ಅವರು ಪ್ರತಿ ವರ್ಷವೂ […]

Continue Reading
IMG 20220804 WA0048

ಆನೇಕಲ್: ವರಮಹಾಲಕ್ಷ್ಮಿ ಹಬ್ಬ…!

ಆನೇಕಲ್: ವರಮಹಾಲಕ್ಷ್ಮಿ ಹಬ್ಬ ದಿಂದ ದುಬಾರಿಯಾಯ್ತು ಹೂವು, ಹಣ್ಣು, ತರಕಾರಿ. ಆನೇಕಲ್ ನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಡುವಲ್ಲೂ ಹೂ – ಹಣ್ಣು ಖರೀದಿಸಲು ಜನದಟ್ಟಣೆ ಕಂಡು ಬಂತು. ಇದಲ್ಲದೆ ಹಬ್ಬದ ಸಲುವಾಗಿ ಪೂಜಾ ಸಾಮಗ್ರಿಗಳನ್ನು ಮಾರಲು ಹಲವೆಡೆ ರಸ್ತೆ ಬದಿಗಳಲ್ಲೇ ಮಿನಿ ಮಾರುಕಟ್ಟೆಗಳು ಹುಟ್ಟಿಕೊಂಡಿದ್ದು, ಇಲ್ಲಿಯೂ ಖರೀದಿಯ ಭರಾಟೆ ಜೋರಾಗಿ ನಡೆದಿದೆ. ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೆ ಕನಕಾಂಬರದ ಬೆಲೆ ಗಗನಕ್ಕೇರಿದೆ. ಮಲ್ಲಿಗೆ, ಮಳ್ಳೆ ಮತ್ತಿತರ ಹೂ, ಬಾಳೆಹಣ್ಣು ಸೇರಿದಂತೆ ಹಲವು ಹೂವು, ಹಣ್ಣುಗಳ ಬೆಲೆ […]

Continue Reading